Thursday, April 15, 2010

ಮನದ ಮಾತು

ಮನಸೆ ನಿಲ್ಲು, ಹೊರಳಾಡಬೇಡ
ಕಟ್ಟಿರುವೆ ಕಚ್ಚಿದಂತೆ ಕುಣಿದಾಡ ಬೇಡ
ಬಯಕೆ ಬೊಬ್ಬಿರಿದು ಬಂಧಿಸುವ ಮೊದಲೆ
ನೆಲೆಸು ನಿನ್ನೊಳಗಿನ ಸತ್ಯ ರೂಪದೆಲೆ

ಬುದ್ಧಿ ಬಾರದೆ ನಿನಗೆ, ನಿಲ್ಲಿಸು ಕುತರ್ಕಗಳ
ತೊಚಿದೆಡೆ ಓಡುವ ಹಳೆ ಚಾಳಿಗಳ
ಸುಖ ಮರೀಚಿಕೆಯಾಯ್ತು, ದುಃಖ ನಿತ್ಯವಾಯ್ತು
ಪಾಪದ ಕೊಡ ತುಂಬಿ ಹೊರ ಚೆಲ್ಲತೊಡಗಿತು

ನೆನೆ ನೆನೆ ಗುರುಚರಣವ ತಡಮಾಡದೆಲೆ
ಇದುವೆ ಪಾಪಿಗಳ ಉದ್ದರಿಸೊ ಸನಿಹ ನೆಲೆ
ಭಜಿಸು ಅನುದಿನವು ಗುರು ನಾಮವ
ಪಾಪಗಳ ತೊಳೆವ ಸುಲಭ ಅಮೃತವ.

ಗುರುವೆ ಬೆಳಕು, ಗುರುವೆ ಬದುಕು
ಗುರುನಾಮವೆ ಚಿಂತನಕು, ಸಕಲಕು
ಗುರುವೊಂದೆ ದಾರಿ, ಭಜಿಸು ಬಿಡದೆಲೆ
ದಾಟಿಬಿಡು ಮೋಕ್ಷಕ್ಕೆ ಭೂಮಿ ನುಂಗುವ ಮೊದಲೆ

---ಮಹಾ ಭಟ್

No comments:

Post a Comment