Friday, September 17, 2010

ದೇವ ಗಣೇಶ

ದೇವನೆ ಬಾ ಎಂದು ಭಜಿಸುತಲಿರಲು
ಕಷ್ಟವ ಕಳೆಯಲು ಮೊರೆಯಿಡಿತಿರಲು
ನಗುತಲೆ ಬರುವನು ನಮ್ಮಯ ಗಣಪ
ಭುವಿಯನು ಬೆಳಗುವ ವೀರ ಪ್ರದೀಪ.

ಕೈಯಲಿ ಮೋದಕ, ಕೊರಳಲಿ ಮಾಲೆ,
ಬಣ್ಣ ಬಣ್ಣದ ಕಿರೀಟ, ಶಿರದ ಮೇಲೆ,
ಬೃಹ್ಮಾಂಡ ಹೊಟ್ಟೆಗೆ ಹಾವಿನ ಬಂಧನ
ಇಲಿಯೇ ಇವನನು ಹೋರುವ ವಾಹನ.

ಚಕ್ಕುಲು ಕೋಡ್ಬಳೆ ಪಂಚಕಜ್ಜಾಯ
ತಿನ್ನಲು ಇವನಿಗೆ ಬಹಳ ಪ್ರಿಯ.
ಬಿಡದೆ ಬರುವನು ಭಾದ್ರಪದ ಚೌತಿಯಲಿ
ಪ್ರೀತಿ, ಭಕ್ತಿಯ ಬೆಳೆಸುವನೆಲ್ಲರಲಿ.

ಪ್ರಥಮ ವಂದಿತನು, ಕಷ್ಟವ ಕಳೆವನು,
ಎಲ್ಲರ ಮೆಚ್ಚಿನ ದೇವನು ಇವನು.
ಎಲ್ಲರ ರಂಜಿಸಿ, ಹೊಟ್ಟೆಯ ತುಂಬಿಸಿ,
ಸಲಹುವನೆಲ್ಲರ ಮುದದಲಿ ಹರಸಿ.

ಕೈಲಾಸ ವಾಸಿಯು, ಸುಂದರ ವದನನು,
ಗೌರಿಯ ಜೊತೆಗೂಡಿ ಓಡುತ ಬರುವನು.
ಎಲ್ಲರ ನೋಡಿ, ವರವನು ನೀಡಿ,
ನಗುತಲೆ ನಡೆವನು ನೀರಿನಡಿ.

---------------ಮಹಾ

No comments:

Post a Comment