ಕನಸಾಯಿತು, ಕಳೆದು ಹೋಯಿತು,
ಮನದ ದುಗುಡ ನಿಜವಾಯಿತು.
ಬಂಧ ಹರಿಯಿತು ಮನ ಮಿಡಿಯಿತು
ಗಾಢ ಕತ್ತಲೆಗೆ ಮನವು ಸರಿಯಿತು.
ಬಂದೆ ಬಾಳಲಿ ಬೆಳದಿಂಗಳಂತೆ.
ಚಪ್ಪರದಲಿ ಇಣುಕುವ ಕಿರಣದಂತೆ
ಕುಡಿಯೊಡೆದಿತ್ತು ಹರುಷದ ನವ ಬಾಳು
ಕನಸು ಗರಿಗೆದರಿ ಮುಟ್ಟಿತ್ತು ಮುಗಿಲು.
ಉಸಿರು ಬಿಸಿ, ಮನದ ತವಕ,
ಸಂದೇಶಕೆ ಕಾಯುವದೆ ನಿತ್ಯ ಕಾಯಕ
ಮನದಾಳದಿ ಬೆಳೆದಿತ್ತು ಬೆಟ್ಟದಷ್ಟು ಪ್ರೀತಿ
ಅದುಮಲಾಗದೆ ಹೋಯ್ತು ಮನದ ಭೀತಿ.
ದೂರಾದೆ ಒಂದಿನಿತು ಕರುಣೆ ಇಲ್ಲದೆ,
ತೊರೆದೆ ಸಂಪರ್ಕಗಳ ಕಾರಣ ಕೊಡದೆ
ಸುಡುತಿದೆ ಒಡಲ ಪ್ರೀತಿಯಾ ಚಿತೆ
ನಾ ಹೇಳದಾದೆ...
ನೀ ಏಕೆ ಅರಿಯದಾದೆ?.....
----ಮಹಾ
superb sir..
ReplyDelete